Monday, 19 March 2018

ಪೂನಾ ಒಪ್ಪಂದ (೧೯೩೨)

               ಗಾಂಧೀಜಿಯವರು ಅಸ್ಪೃಶ್ಯರಿಗೆ ನೀಡಿದ ಪ್ರತ್ಯೇಕ ಮತೀಯ ಪ್ರಾತಿನಿಧ್ಯದ ವಿರುದ್ಧ ತಾನು ಇದ್ದ ಪೂನಾದ ಯರವಾಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಗಾಂಧೀಜಿ ಹರಿಜನರನ್ನು ಹಿಂದೂಗಳಿಂದ ಪ್ರತ್ಯೇಕಿಸುವ ಬ್ರಿಟಿಷರ ಕುಟಿಲ ನೀತಿಯನ್ನು ಸಹಿಸಲಿಲ್ಲ. ಕೊನೆಗೆ ಗಾಂಧಿ ಮತ್ತು ಅಂಬೇಡ್ಕರರ ನಡುವೆ ೧೯೩೨ರಲ್ಲಿ ಪೂನಾ ಒಪ್ಪಂದವಾಗಿ ಗಾಂಧೀಜಿ ಉಪವಾಸವನ್ನು ನಿಲ್ಲಿಸಿದರು. ಪೂನಾ ಒಪ್ಪಂದದಂತೆ ಹರಿಜನರಿಗೆ ಜಂಟಿ ಮತ ಕ್ಷೇತ್ರ ಇರುವಂತೆ ಒಪ್ಪಲಾಯಿತು. ಶಾಸಕಾಂಗಗಳಲ್ಲಿ ಅಸ್ಪೃಶ್ಯರಿಗೆ ಕೊಟ್ಟಿದ್ದ ಪ್ರಾಂತ್ಯ ವಿಧಾನಸಭೆಗಳ ಮೀಸಲು ಸ್ಥಾನಗಳನ್ನು ೭೧ ರಿಂದ ೧೪೮ಕ್ಕೆ ಹೆಚ್ಚಿಸಿ ಪ್ರತಿಯಾಗಿ ಅವರಿಗೆ ನೀಡಿದ್ದ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ಕೈ ಬಿಡಲಾಯಿತು.
               ೧೯೩೨ರಲ್ಲಿ ಲಂಡನ್ನಲ್ಲಿ ೩ನೇ ಚಕ್ರಗೋಷ್ಠಿ ನಡೆಯಿತು. ಇದರಲ್ಲಿ ಕಾಂಗ್ರೆಸ್ ಭಾಗವಹಿಸಲಿಲ್ಲ. ಅದು ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ಶ್ವೇತ ಪತ್ರವನ್ನು ಸಿದ್ಧಪಡಿಸಿ ಬ್ರಿಟಿಷ್ ಪಾರ್ಲಿಮೆಂಟುಗೆ ಒಪ್ಪಿಸಿತು. ಅದಕ್ಕೆ ಪಾರ್ಲಿಮೆಂಟ್ ಒಪ್ಪಿಗೆ ಕೊಟ್ಟ ನಂತರ ಅದು ೧೯೩೫ರ ಭಾರತ ಸರ್ಕಾರಿ ಕಾಯ್ದೆಯಾಗಿ ಹೊರ ಬಂದಿತು.

No comments:

Post a Comment