Wednesday, 2 May 2018

ಮಧ್ಯಕಾಲೀನ ಭಾರತ

ಮಹಮ್ಮದ್ ಘಜ್ನಿ ( ಕ್ರಿ. .೯೯೭-೧೦೩೦):-
             ಕ್ರಿ‌.ಶ. ೯೯೭ ರಲ್ಲಿ ಮಹಮ್ಮದ್ ಘಜ್ನಿಯು ಸಿಂಹಾಸನವನ್ನೇರಿದನು. ಅವನು ಸಂಪತ್ತನ್ನು ಲೂಟಿ ಮಾಡುವ ಉದ್ದೇಶದಿಂದ ಭಾರತದ ಮೇಲೆ ೧೭ ಬಾರಿ ದಾಳಿ ಮಾಡಿದನು. ಅವನು ಕ್ರಿ. ಪೂ. ೧೦೨೫ ರಲ್ಲಿ ಗುಜರಾತಿನ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದನು. 'ಶಹನಾಮ'ವನ್ನು ಬರೆದ ಫಿರ್ದೂಸಿಯು ಇವನ ಆಸ್ಥಾನದಲ್ಲಿದ್ದನು. ಘಜ್ನಿಯ ಮಹಮ್ಮದ್ ನು ಮಧ್ಯ ಏಷ್ಯಾದ ವಿದ್ವಾಂಸ ಆಲ್ಬೆರೂನಿಯನ್ನು ಭಾರತಕ್ಕೆ ಕಳುಹಿಸಿದ್ದನು. ಮಹಮ್ಮದ್ ನು ಕ್ರಿ. ಶ. ೧೦೩೦ ರಲ್ಲಿ ಘಜ್ನಿಯಲ್ಲಿ ಮರಣ ಹೊಂದಿದನು.

No comments:

Post a Comment