ಮುಮ್ಮಡಿ ಕೃಷ್ಣರಾಜ ಒಡೆಯರ್ :-
ಮುಮ್ಮಡಿ ಕೃಷ್ಣರಾಜ ಒಡೆಯರ್ ಖಾಸಾ ಚಾಮರಾಜ ಒಡೆಯರ ಪತ್ನಿ ಲಕ್ಷ್ಮಿಮ್ಮಣ್ಣಿಯ ಮಗನಾಗಿ ೧೭೯೪ ರಲ್ಲಿ ಜನಿಸಿದರು. ಟಿಪ್ಪುವು ಕ್ರಿ. ಶ. ೧೭೯೯ ರಲ್ಲಿ ಅಂತ್ಯಗೊಂಡ ಮೇಲೆ ಬ್ರಿಟಿಷರು ಇವರನ್ನು ಮೈಸೂರಿನ ಅರಸರನ್ನಾಗಿ ಮಾಡಿದ್ದಲ್ಲದೆ, ಜುಲೈ ೧೭೯೯ ರಲ್ಲಿ ಸಹಾಯಕ ಸೈನ್ಯ ಪದ್ಧತಿಯ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿಸಿದರು. ಇವರಿಗೆ ಕೇವಲ ೫ ವರ್ಷ ವಯಸ್ಸಾದುದರಿಂದ ಮಹಾರಾಣಿ ಲಕ್ಷ್ಮಿಮ್ಮಣ್ಣಿಯವರು ರಾಜಪ್ರತಿನಿಧಿಯಾಗಿದ್ದುಕೊಂಡು ಆಡಳಿತದ ಜವಾಬ್ದಾರಿಯನ್ನು ದಿವಾನ್ ಪೂರ್ಣಯ್ಯ (ಕ್ರಿ. ಶ. ೧೭೯೯-೧೮೧೧) ನವರಿಗೆ ವಹಿಸಿದರು. ಆಡಳಿತದ ಅನೂಕೂಲಕ್ಕಾಗಿ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾವಣೆ ಮಾಡಲಾಯಿತು. ಪೂರ್ಣಯ್ಯನವರು ಹಲವಾರು ದಂಗೆಗಳನ್ನು ಅಡಗಿಸಿದರು. ೧೮೧೧ ರಲ್ಲಿ ಪೂರ್ಣಯ್ಯನವರು ನಿವೃತ್ತರಾದ ಮೇಲೆ ಮುಮ್ಮಡಿ ಕೃಷ್ಣರಾಜ ಒಡೆಯರು ರಾಜ್ಯದ ಆಡಳಿತವನ್ನು ವಹಿಸಿಕೊಂಡರು. ಆಡಳಿತದಲ್ಲಿ ಹಲವಾರು ಸುಧಾರಣೆಗಳನ್ನು ತಂದರಾದರೂ, ಹಲವೆಡೆ ದಂಗೆಗಳೆದ್ದು, ಅಧಿಕಾರಿಗಳ ಅದಕ್ಷತೆಯಿಂದ ಕಂದಾಯ ಹಾಗೂ ತೆರಿಗೆಗಳು ಸರಿಯಾಗಿ ವಸೂಲಾಗಲಿಲ್ಲ. ಇದರಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಸಮರ್ಥರೆಂದು ತೀರ್ಮಾನಿಸಿ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ ಕ್ರಿ. ಶ. ೧೮೩೧ ರಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಆಡಳಿತವನ್ನು ತಾನೇ ವಹಿಸಿಕೊಂಡನು. ಹೀಗಾಗಿ ಕ್ರಿ. ಶ. ೧೮೩೧ ರಿಂದ ೧೮೮೧ ರವರೆಗೆ ಮೈಸೂರು ಸಂಸ್ಥಾನದ ಆಡಳಿತವನ್ನು ಬ್ರಿಟಿಷ್ ಕಮಿಷನರಗಳು ನಡೆಸಿದರು.
Friday, 30 March 2018
ಮುಮ್ಮಡಿ ಕೃಷ್ಣರಾಜ ಒಡೆಯರ್ (ಕ್ರಿ. ಶ. ೧೭೯೯-೧೮೩೧)
Subscribe to:
Post Comments (Atom)
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...
No comments:
Post a Comment